ಸಂಕ್ರಾಂತಿ 2011


ಧನುವಿನಿಂದ ಮಕರದೊಳಗೆ
ನಡೆದ ಸೂರ್ಯನು
ಧರೆಯ ಛಳಿಯ ನೀಗಿಸಲು
ಯಾತ್ರೆ ಹೊರಟನು

ಉತ್ತರಾಯಣದ ಪ್ರಖರ
ಬೆಳಕ ಉಡುಗೊರೆ
ಹೆಚ್ಚು ಹಗಲು ಹೆಚ್ಚು ಬೆಳಕು
ಹೊಳೆವುದೀಧರೆ

ಗದ್ದೆಯಲ್ಲಿ ರಾಶಿ ಹಾಕಿ
ಕುಣಿದು ನಲಿಯುವ
ಎಳ್ಳು ಬೆಲ್ಲ ಮೆದ್ದು ಮನದ
ಪಿತ್ತ ಕಳೆಯುವ

ನದಿಯ ದಡದಿ ನೆಂಟರೊಡನೆ
ಊಟ ಅಧ್ಭುತ
ವಸಂತನನ್ನು ಕರೆವ
ಒಳ್ಳೆ ಮಾತನಾಡುತ

ಬೆಳೆವ ರೈತ ಒಳ್ಳೆ ಬೆಲೆಯ
ಪಡೆದು ನಲಿಯಲಿ
ಪ್ರವಾಹ ಕಂಡ ಜನತೆ
ಹೊಸತು ಬದುಕು ಕಾಣಲಿ
ಸಂಕ್ರಾಂತಿ ಎಲ್ಲರಲ್ಲಿ
ಶಾಂತಿ ಹಂಚಲಿ

ಸಂಕ್ರಾಂತಿ ಶುಭಾಶಯಗಳು

ಶ್ರೀನಿವಾಸ ಮಹೇಂದ್ರಕರ್


Comments

Popular posts from this blog

ದುಂಡುಹೊಟ್ಟೆ ತುಂಟ

ಮತ್ತೆ ಬಾರದ ದಿನಗಳು

ಸ್ಮಶಾನ ವೈರಾಗ್ಯ