Posts

Showing posts from October, 2015

ಇಬ್ಬನಿ

Woke up to a thick mist ಇಬ್ಬನಿ ಹನಿಯನು ಹೊದ್ದಿಸಿ ಹೊರಟಿಹ ಮಂಜಿನ ಪರಧಿಯ ಮೋಡಿಯಲಿ ಭುವಿಯನು ಕಾಣದೆ ರವಿಮನ ನೊಂದಿದೆ  ಸೋತಿದೆ ಬೆಳಕು ಯುದ್ದದಲಿ ದಾರಿಯು ಕಾಣದೆ ಕಾರಿನ ಕಣ್ಗಳು ತಿರುಗಲು ಅಂಜಿವೆ ಗಾಲಿಗಳು ಆಗಸ ಸಾಲದೆ ಭೂಮಿಯ ಮಡಿಲನು ಆವರಿಸಿಹ ಕಾರ್ಮೋಡಗಳು ತಳಮಳವಾದರೂ ಗೂಡನು ತೊರೆದಿವೆ ಕಾಳನು ಹುಡುಕುತ ಹಕ್ಕಿಗಳು ಬೆಳಕದು ಸೋತರೂ , ಸದ್ದದು ಗೆದ್ದಿದೆ ಸವಿನುಡಿ ಖಗಗಳ ಹಾಡುಗಳು ಬೆಟ್ಟದ ಸಾಲದು ಬಯಲಂತಾಗಿದೆ ಕಣ್ಣೆ ಮುಚ್ಚೆ ಆಟವಿದು ಅವಿತಿಹರಾರು ? ಹುಡುಕಿಹರಾರು? ನೇಸರ ಬರೆದಾ ಒಗಟುಯಿದು ಉರಿಯದ ಬೆಂಕಿಗೆ ಹೊತ್ತಿದ ಹೊಗೆಯಿದು ಶ್ವಾಸಕೆ ತಂಪನು ಈಯುವುದು ಜಡತೆಯ ತೊರೆದು , ಬಯಲೊಳಗಿಲಿದರೆ ಮನ ಉಲ್ಲಾಸದಿ ಈಜುವುದು ಮನ ಉಲ್ಲಾಸದಿ ಈಜುವುದು ಶ್ರೀನಿವಾಸ ಮಹೆಂದ್ರಕರ್